ಉದಯವಾಹಿನಿ ಪೀಣ್ಯ ದಾಸರಹಳ್ಳಿ :  ಕ್ಷೇತ್ರದ  ಭೀಮ ಸಂದೇಶ ಕನ್ನಡ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹ ಮೂರ್ತಿ ಅವರ ನೇತೃತ್ವದಲ್ಲಿ ಜರುಗಿದ  ಬಾಬಾಸಾಹೇಬ್ ಡಾ. ಬಿ ಆರ್  ಅಂಬೇಡ್ಕರ್ ರವರ,ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಹಾಗೂ  ವಿಶ್ವ ಪತ್ರಿಕಾ ದಿನಾಚರಣೆ ಪೀಣ್ಯ 2ನೇ ಹಂತದ ಎಂ ಇ ಎಸ್ ಆಂಗ್ಲ ಮಾಧ್ಯಮ ಶಾಲಾ ಮುಂಭಾಗದಲ್ಲಿ ಆಚರಿಸುವ ಮೂಲಕ ಬೆಳ್ಳಿ ರಥದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೀಣ್ಯ 2ನೇ ಹಂತದಲ್ಲಿರುವ  ಬೃಹತ್ ಗಾತ್ರದ ಅಂಬೇಡ್ಕರ್ ಪ್ರತಿಮೆ ಸ್ಥಳದಿಂದ ಮೆರವಣಿಗೆಯು   ರಾಜಗೋಪಾಲನಗರ ಮುಖ್ಯ ರಸ್ತೆ, ಅಂದ್ರಹಳ್ಳಿ ಮುಖ್ಯ, ಫ್ರೆಂಡ್ಸ್ ಕಾಲೊನಿ ರಸ್ತೆ ಮಾರುತಿ ನಗರ ,ಹೆಗ್ಗನಹಳ್ಳಿ ಮುಖ್ಯ ರಸ್ತೆ ಮೂಲಕ ಹೆಗನಹಳ್ಳಿ ಕ್ರಾಸ್ ಮತ್ತು ಎಂ ಇ ಎಸ್ ಶಾಲಾ ಮುಂಭಾಗದಲ್ಲಿ ಡಾ ಅಂಬೇಡ್ಕರ್ ಬೃಹತ್ ವೇದಿಕೆಗೆ ಮುಕ್ತಾಯಗೊಂಡಿತು.
ನಂತರ ಚೊಕ್ಕಸಂದ್ರ ಬ್ಲಾಕ್  ಜೆಡಿಎಸ್ ಅಧ್ಯಕ್ಷ ಡಾ.ರುದ್ರೆಗೌಡರಿಗೆ ಭೀಮ ಸಂದೇಶ ಕನ್ನಡ ದಿನಪತ್ರಿಕೆ ಸಂಪಾದಕ ಹಾಗೂ ಕಾರ್ಯ ಕ್ರಮದ ಸಂಯೋಜಕ ವೈ ಜಿ ನರಸಿಂಹ ಸ್ವಾಮಿ ಅವರು ಗೌಡರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ  ಡಾ. ಬಿ ಆರ್ ಅಂಬೇಡ್ಕರ್ ಭಾವ ಚಿತ್ರಯುಳ್ಳ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತ ಬಸವರಾಜ್ ಜಮಾದಾರ್,ಉದಯ ವಾಹಿನಿ ಕನ್ನಡ ದಿನಪತ್ರಿಕೆಯ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್ ,ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಕಾರ್ಯಕರ್ತ ಶ್ರೀಕಾಂತ್, ಸೇರಿದಂತೆ ಹಲವಾರು ಮುಖಂಡರು ಅಂಬೇಡ್ಕರ್ ಅಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!