ಉದಯವಾಹಿನಿ, ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಸಮಸ್ಯೆಗೆ ಇತಿಶ್ರೀ ಹಾಡಲು ಜಿಬಿಎ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇನ್ನುಂದೆ ರಾತ್ರಿ ಸಮಯದಲ್ಲೂ ಕಸ ಸಂಗ್ರಹಿಸಲು ಜಿಬಿಎ ನಿರ್ಧರಿಸಿದೆ.ಕೆಲಸಕ್ಕೆ ಹೋಗುವವರು ಹಗಲು ಹೊತ್ತಿನಲ್ಲಿ ಕಸದ ಗಾಡಿಗೆ ಕಸ ಹಾಕಲು ಆಗದೆ, ರಸ್ತೆ ಬದಿ ಎಸೆದು ಹೋಗುತ್ತಾರೆ. ಇದನ್ನು ತಡೆಗಟ್ಟುವ ದೃಷ್ಟಿಯಿಂದ ರಾತ್ರಿ ಟಿಪ್ಪರ್ ಲಾರಿಗಳ ಮೂಲಕ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಮೊದಲಿಗೆ ದಕ್ಷಿಣ ನಗರ ಪಾಲಿಕೆಯಿಂದ ಪ್ರಾಯೋಗಿಕವಾಗಿ ಸಂಗ್ರಹಿಸಲಾಗಿದ್ದು, ಇದು ಯಶಸ್ವಿಯಾದರೇ ಮುಂದೆ ನಗರದಾದ್ಯಂತ ಜಾರಿಗೆ ತರಲಾಗುವುದು.
