ಉದಯವಾಹಿನಿ, ಶಹದೋಲ್, ಮಧ್ಯಪ್ರದೇಶ: ಮನಸ್ಸಿದ್ದರೆ ಮಾರ್ಗ.. ಇಚ್ಛಾಶಕ್ತಿಯೊಂದು ಇದ್ದರೆ ಏನನ್ನಾದರೂ ಸಾಧಿಸಬಹುದು. ಇದಕ್ಕೆ ಸ್ಪಷ್ಟ ಉದಾಹರಣೆ ಆಗಿ ನಾವು ನಿಮಗೆ ಅಂತಹ ಒಬ್ಬ ಯುವಕನ ಸ್ಟಾರ್ಟ್ಅಪ್ ಸಾಹಸದ ಬಗ್ಗೆ ನಿಮಗೆ ಹೇಳಲಿದ್ದೇವೆ. ಅವರ ಉತ್ಸಾಹ ಅವರನ್ನು ತಮ್ಮದೇ ಆದ ಮಾರ್ಗವನ್ನ ಆಯ್ಕೆ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿತು. ಈ ದಾರಿಯ ಮೂಲಕ ಅವರು ಅಸಾಧ್ಯವಾದದನ್ನು ಸಾಧಿಸಿ ತೋರಿಸಿದ್ದಾರೆ. ಇಂದೋರ್ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ಇವರು ಪುಣೆಯಲ್ಲಿ ಎಂಬಿಎ ಕೂಡಾ ಮಾಡಿದ್ದಾರೆ.
ಬೆಂಗಳೂರಿನಂತಹ ಸ್ಥಳಗಳಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಂದ ಹಾಗೆ ಇವರ ಹೆಸರು ಅಂಬರ್ ಜೈನ್.. ಇವರಿಗೆ ಇನ್ನೂ ವಿಭಿನ್ನವಾದದನ್ನು ಮಾಡುವ ಹಂಬಲ. COVID-19 ಸಾಂಕ್ರಾಮಿಕ ಸಮಯದಲ್ಲಿ ಅವರು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದರು. ಹೀಗಾಗಿ ಅವರ ಮನದ ಆಶೆ ಮತ್ತು ಉತ್ಸಾಹ ತಮ್ಮದೇ ಆದ ಉಪ್ಪಿನ ಸ್ಟಾರ್ಟ್ಅಪ್ ಪ್ರಾರಂಭಿಸಲು ಪ್ರೇರಣೆ ಒದಗಿಸಿತು. ಇದಕ್ಕಾಗಿ ಅವರು ತಮ್ಮ ಕೆಲಸವನ್ನು ತ್ಯಜಿಸಿದರು. ಹೀಗೆ ಆರಂಭವಾದ ಇವರ ಸಾಹಸ ಈಗ ಅವರಿಗೆ ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುತ್ತಿದೆ. ಎಂಜಿನಿಯರ್ ಉಪ್ಪು, ಚಾಟ್ ಮಸಾಲ, ಜಿರಾಮನ್ ಸ್ಟಾರ್ಟ್ಅಪ್: ಶಹದೋಲ್ ನಿವಾಸಿಯಾದ ಅಂಬರ್ ಜೈನ್, ಸಾರ್ವಜನಿಕರಿಗೆ ಮತ್ತು ಯುವಕರಿಗೆ ಮಾದರಿಯಾಗುತ್ತಿರುವ ಸ್ಟಾರ್ಟ್ಅಪ್ ಪ್ರಾರಂಭಿಸಿದ್ದಾರೆ. ಅದರಿಂದ ಗಣನೀಯ ಆದಾಯ ಗಳಿಸುತ್ತಿದ್ದಾರೆ. ಇದನ್ನು ಸಾಧಿಸಲು ಅವರು ಜಿಲ್ಲಾ ಕೇಂದ್ರದಿಂದ 5 ಕಿಲೋಮೀಟರ್ ದೂರದಲ್ಲಿರುವ ಪಚ್ಗಾಂವ್ನಲ್ಲಿ ತಮ್ಮ ಸಂಪೂರ್ಣ ವ್ಯವಹಾರವನ್ನು ನಡೆಸುತ್ತಿದ್ದಾರೆ. ಕಪ್ಪು ಉಪ್ಪು, ಕಲ್ಲು ಉಪ್ಪು, ಚಾಟ್ ಮಸಾಲ ಮತ್ತು ಜೀರಿಗೆ ಸೇರಿದಂತೆ ವಿವಿಧ ರೀತಿಯ ಉಪ್ಪನ್ನು ಉತ್ಪಾದಿಸಲು ಶುರು ಮಾಡಿದ್ದಾರೆ.
ಇತ್ತೀಚೆಗೆ, ಅವರು ಒಣ ಮಾವಿನ ಪುಡಿ, ರಾಗಿಯಿಂದ ತಯಾರಿಸಿದ ಹಿಟ್ಟು, ರಾಗಿ, ಜೋಳ, ರಾಗಿ ಮತ್ತು ಬಹುಧಾನ್ಯ ಮೆಕ್ಕೆಜೋಳದಂತಹ ಹೊಸ ಉತ್ಪನ್ನಗಳನ್ನು ಉತ್ಪಾದನೆ ಶುರುವಿಟ್ಟುಕೊಂಡಿದ್ದಾರೆ. ಅವರ ಪ್ರತಿಯೊಂದು ಉತ್ಪನ್ನಕ್ಕೂ ಮಾರುಕಟ್ಟೆಯಿಂದ ಅದ್ಭುತ ಪ್ರತಿಕ್ರಿಯೆ ಕೂಡಾ ಸಿಗುತ್ತಿದೆ.
