ಉದಯವಾಹಿನಿ ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಅಮರ ಶ್ರೀ ಆಲದ ವೀಕ್ಷಣೆಗಾಗಿ ಕರೆತಂದ ಕಾಲೇಜಿನ ಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿ ರವಿಕುಮಾರ ಮಸ್ಕಿ ಮಾತನಾಡಿ ವನಸಿರಿ ಫೌಂಡೇಶನ್ ತಂಡದ ವತಿಯಿಂದ ಮರುಜೀವ ಪಡೆದ ಈ ಆಲದ ಮರ,ರೈತನ ಹೊಲದಲ್ಲಿ ಬೃಹದಾಕಾರವಾಗಿ ಬೆಳೆದಾಗ ಅದು ಊಳುಮೆ ಮಾಡಲು ತೊಂದರೆ ಆಗುತ್ತದೆ ಎಂದು ತಿಳಿದು ಅದನ್ನು ಕಡಿದು ಹಾಕಿದ.ಅದನ್ನು ಕಂಡ ವನಸಿರಿ ಫೌಂಡೇಶನ್ ಅಮರೇಗೌಡ ಅವರು ಅದನ್ನು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಇಲ್ಲಿಗೆ ತಂದ ನಂತರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಈ ಸ್ಥಳದಲ್ಲಿ ನೆಟ್ಟರು ಇದನ್ನು ನೆಟ್ಟು ಒಂದೇ ವರ್ಷದಲ್ಲಿ ಬೃಹದಾಕಾರವಾಗಿ ಮತ್ತೆ ಬೆಳೆದು ನಿಂತಿದೆ ಇದು ಕೇವಲ ಅಮರೇಗೌಡ ಅವರಿಗೆ ಮಾತ್ರ ಶುದ್ಧವಾದ ಗಾಳಿಯನ್ಬು ನೀಡುವುದಿಲ್ಲ ಅದು ಇಡೀ ನಮ್ಮ ಸಿಂಧನೂರಿನ ಜನರಿಗೆಲ್ಲರಿಗೂ ಶುದ್ಧವಾದ ಗಾಳಿನೀಡುತ್ತದೆ.

ಇವತ್ತಿನ ದಿನಗಳಲ್ಲಿ ನಾವುಗಳು ಗಾಳಿಯನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದಿದೆ ಆದರೆ ಇಡೀ ಸಿಂಧನೂರಿಗೆ ನೈಸರ್ಗಿಕವಾಗಿ ಉಚಿತವಾಗಿ ಶುದ್ಧಗಾಳಿ ನೀಡುವ ಏಕೈಕ ಜೀವಿ ಅಂದರೆ ಈ ಆಲದ ಮರ ಇಂತಹ ಪ್ರತಿಯೊಂದು ಮರಗಳನ್ನು ನಾವುಗಳೆಲ್ಲರೂ ಸಂರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಹಾಗೂ ನ್ಯಾಷನಲ್ ಕಾಲೇಜಿನ ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!