ಉದಯವಾಹಿನಿ,ಚಿಂಚೋಳಿ: ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಮೌಲಾನ್ ಪಟೇಲರವರು ವಯೋನಿವೃತ್ತಿ ಹೊಂದಿರುವ ಕಾರಣ ಚನ್ನವೀರ ಮೋಟರ್ಸ್ ಮಾಲಿಕರಾದ ವೀರೂಪಾಕ್ಷಪ್ಪ ಯಂಪಳ್ಳಿ ನೇತೃತ್ವದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ವೀರೇಶ ಯಂಪಳ್ಳಿ ಮಾತನಾಡಿ ಮೌಲಾನ್ ಪಟೇಲ ಅವರು 30ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸರ್ಕಾರಿ ಸೇವೆ ಸಲ್ಲಿಸಿ ವಿಧ್ಯಾರ್ಥಿಗಳಿಗೆ ಉತ್ತಮವಾಗಿ ಕ್ರೀಡಾಪಟ್ಟುಗಳಾಗಿ ಬೆಳೆಸಿ ತಾಲ್ಲೂಕಾ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1992ರಿಂದ ಸತತವಾಗಿ 2023ರವರೆಗೆ ಸೇವೆ ಸಲ್ಲಿಸಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ವಯೋನಿವೃತ್ತಿ ಹೊಂದುತ್ತಿರುವುದು ಸಂತೋಷದ ವಿಷಯ ಮುಂದೆ ಅವರ ಜೀವನ ಕುಟುಂಬಸ್ಥರ ಜೋತೆವಿದ್ದು ಸಮಾಜ ಸೇವೆ ಮಾಡಲಿ ಎಂದರು. ಈ ಸಂದರ್ಭದಲ್ಲಿ ಬಸವಣ್ಣಗೌಡ ಪಾಟೀಲ,ರಾಜಶೇಖರ ಮುಸ್ತಾರಿ,ಸಂತೋಷ ಸೀಳಿನ್,ಮಹಾಂತೇಶ ಯಂಪಳ್ಳಿ,ರವೀಂದ್ರ ಪೋಲಕಪಳ್ಳಿ,ರಮೇಶ ಬೇಕರಿ,ಉಮಾ ಪಾಟೀಲ,ಶಂಕರರಾವ ಅಡಕಿ,ರಮೇನ ಮಕಾಶಿ,ಸಂಗಮೇಶ,ಸಾವನ ಕುಲಕರ್ಣಿ,ಸನ್ನಿ ಜಾಬಶೇಟ್ಟಿ,ಆನಂದ,ಸಾಯಬಣ್ಣ,ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!