
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ಪ್ರಜಾ ಶಕ್ತಿ ಸೇವಾ ಸಂಘದ ಸಂಸ್ಥಾಪಕ ಕಾರವನಹಳ್ಳಿ ಜಿ.ಬೇಟಪ್ಪ ರಾವಣ್ ಅವರಿಗೆ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ನ್ಯೂಸ್ ಪ್ರೆಸ್ ಕ್ಲಬ್ ಅಧ್ಯಕ್ಷ ಅಯ್ಯಣ ಮಾಸ್ಟರ್ ಹಾಗೂ ಭೀಮ ಸಂದೇಶ ಕನ್ನಡ ಪತ್ರಿಕೆ ಸಂಪಾದಕ ವೈ ಜಿ ನರಸಿಂಹ ಮೂರ್ತಿ ಇವರುಗಳು ಬೇಟಪ್ಪ ರಾವಣ್ ರವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಂವಿಧಾನದ ಶಿಲ್ಪಿ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಭಾವ ಚಿತ್ರಯುಳ್ಳ ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಜಾ ಶಕ್ತಿ ಸೇವಾ ಸಂಘದ ನೂತನ ರಾಜ್ಯಾಧ್ಯಕ್ಷ ಉಮೇಶ್ ಗೌಡ, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಉಮೇಶ್ ರಾವ್, ಮಹಿಳಾ ಘಟಕದ ನೂತನ ರಾಜ್ಯಾಧ್ಯಕ್ಷೆ ಸೌಭಾಗ್ಯ, ಫಕೀರಪ್ಪ, ವಿಜಯಲಕ್ಷ್ಮೀ, ಮಂಜುನಾಥ್, ರವಿ, ಗುರುರಾಜ್, ಶೋಭಾ, ಶಿಲ್ಪಾ, ಕಲ್ಯಾಣಿ,ಗಿರೀಜಾ, ಮಹೇಶ್ವರಿ, ಸುಜಾತ, ಪುಷ್ಪಾ, ಮತ್ತು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಕಾರ್ಯದರ್ಶಿ ಶ್ರೀಕಾಂತ್, ಸೇರಿದಂತೆ ಮುಂತಾದವರು ಇದ್ದರು.
One attachment • Scanned by Gmail
