ಉದಯವಾಹಿನಿ, ಔರಾದ್ : ಪಟ್ಟಣದಲ್ಲಿ ಎಬಿವಿಪಿ ಕಾರ್ಯಕರ್ತರಿಂದ ವಿಧ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ರಾಜ್ಯಪಾಲರಿಗೆ ಬರೆದ ಪತ್ರವನ್ನು ಗ್ರೇಡ್ 2 ತಹಶಿಲ್ದಾರ ವೆಂಕಟೇಶ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು. ಗುಲಬರ್ಗಾ ವಿಶ್ವವಿದ್ಯಾಲಯ 1984ರಲ್ಲಿ ಸ್ಥಾಪನೆಯಾಗಿ ಇಲ್ಲಿಗೆ 40 ವರ್ಷಗಳು ಕಳೆಯುತ್ತಾ ಬಂದಿದೆ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತು ಬಂದು ಸದರಿ ವಿಶ್ವವಿದ್ಯಾಲಯ ನಂತರದ ವರ್ಷಗಳಲ್ಲಿ ಶಿಕ್ಷಣದ ಕಾಶಿ ಅಕ್ಷರ ದಾಸೋದ ಮಂದಿರ ಆಗುವ ಬದಲು ಭ್ರಷ್ಟಾಚಾರದ ವ್ಯವಸ್ಥೆಯಾಗಿ ರೂಪುಗೊಂಡಿದೆ ಅನೇಕ ವರ್ಷಗಳಿಂದ ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಅಧೋಗತಿಗೆ ತಲುಪಿದ್ದು ಪಾರದರ್ಶಕ ಆಡಳಿತ ನೀಡಲು ವಿಫಲತೆಯನ್ನು ಕಂಡಿದೆ ಇದರಿಂದ ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿದೆ ಸರ್ಕಾರದ ನಿರ್ಲಕ್ಷ ಇಲ್ಲಿನ ಅಧಿಕಾರಿಗಳಿಗೆ ಮತ್ತು ಆಯಾ ವಿಭಾಗದ ನೌಕರಸ್ಥರಿಗೆ ಖುಷಿಯ ವಿಚಾರವಾಗಿದೆ ಆದ್ದರಿಂದ ಇಲ್ಲಿ ಬ್ರಷ್ಟಾಚಾರ ಬಲಿತು ಅಮಾಯಕ ವಿದ್ಯಾರ್ಥಿಗಳನ್ನು ಶೊಷಣೆಗೆ ಎಡೆ ಮಾಡಿದೆ.
ಸಮಸ್ಯೆಗಳು :
೧) ಸರಿಯಾದ ಸಮಯಕ್ಕೆ ಪರೀಕ್ಷೆಗಳು ನಡೆಯದೆ ಇರುವದು.
೨) ಉದ್ದೇಶ ಪೂರ್ವಕವಾಗಿ ಅಂಕಪಟ್ಟಿಯಲ್ಲಿ ಶೂನ್ಯ ಬರುವಂತೆ ಮಾಡುವದು.
೩)ಆವಕ ಶಾಖೆಯಲ್ಲಿ ಕೊಟ್ಟ ಅರ್ಜಿಗಳನ್ನು ನಿರ್ಲಕ್ಷ್ಯ ಮಾಡುವದು.
೪) ವಿದ್ಯಾರ್ಥಿಗಳ ಅರ್ಜಿಗಳನ್ನು ತಿಂಗಳುಗಟ್ಟಲೆ ಮುಂದೊಡುವುದು.
೫) ಕುಂಟು ನೆಪವೊಡ್ಡಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಗಳ ಫಲಿತಾಂಶ ತಡೆಯೊಡ್ಡುವದು.
೬) ಪರೀಕ್ಷೆ ಕೇಂದ್ರಗಳಿಗೆ ಅರ್ಹತೆ ಇಲ್ಲದ ಉಪನ್ಯಾಸಕರನ್ನು ಬಾಹ್ಯ ಮೇಲ್ವಿಚಾರಕರಾಗಿ ನೇಮಕ ಮಾಡುತ್ತಿದ್ದಾರೆ.
೭) ಹೊಸ ಪದವಿ ಕಾಲೇಜುಗಳಿಗೆ ನಿಯಮ ಮೀರಿ ಅರ್ಹತೆ ಮತ್ತು ಸೌಲಭ್ಯಗಳನ್ನು ಇಲ್ಲದಿದ್ದರು ಅನುಮತಿ ನಿಡಲಾಗುತ್ತಿದೆ.
೮) ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿಗಳು ಕೊಡುತ್ತಿಲ್ಲ.
ಹೀಗೆ ಒಂದಲ್ಲ ಎರಡಲ್ಲ ನಿತ್ಯ ನೂರಾರು ಸಮಸ್ಯೆಗಳನ್ನು ವಿಶ್ವವಿದ್ಯಾಲಯ ಮಾಡುತ್ತಾ ಬಂದಿದೆ ಇದಕ್ಕೆ ಕೊನೆ ಇಲ್ಲದಂತಾಗಿದೆ ಅಮಾಯಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಇದಕ್ಕೆಲ್ಲಾ ಹಲವು ವರ್ಷಗಳಿಂದ ಅಸ್ತಿತ್ವಕ್ಕೆ ಬರುವ ಸರ್ಕಾರಗಳ ಹೊಣೆ ಎಂದು ಹೇಳಿದರೆ ಅತಿಶಯೊಕ್ತಿಯಲ್ಲ. ಒಂದು ವೇಳೆ ಸರ್ಕಾರ ಸೂಕ್ತ ಮತ್ತು ಕಠಿಣ ನಿರ್ಧಾರದ ಕ್ರಮಗಳನ್ನು ವಿಶ್ವವಿದ್ಯಾಲಯದ ಸಿಬ್ಬಂದಿಗಳ ಮೇಲೆ ಕೈಗೊಂಡಿದ್ದರೆ ಇವತ್ತು ಭ್ರಷ್ಟಾಚಾರ ಇಷ್ಟೊಂದು ವ್ಯಾಪಕವಾಗಿ ಬೇರೂರುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸದೆ ಹೋದರೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯದಾದ್ಯಂತ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಬಿವಿಪಿ ಮುಖಂಡರು ದೂರಿದರು.
ಈ ಸಂದರ್ಭದಲ್ಲಿ  ಎಬಿವಿಪಿ ಪ್ರಮುಖರಾದ ಮಲ್ಲಿಕಾರ್ಜುನ ಟೆಕರಾಜ, ಅನೀಲ ಮೇತ್ರೆ, ಅಂಬಾದಾಸ ನೇಳಗೆ, ನಗರ ಕಾರ್ಯದರ್ಶಿ ನೌನಾಥ ಮೇತ್ರೆ, ರಮೇಶ್ ವಾಗಮಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!