
ಉದಯವಾಹಿನಿ ಅಫಜಲಪುರ: ವಿದ್ಯಾರ್ಥಿಗಳ ಜೀವನ ಬಹಳ ಅಮೂಲ್ಯವಾದುದ್ದು,ಅದನ್ನು ಹಾಳು ಮಾಡಿಕೊಳ್ಳದೆ ಸಿಕ್ಕಿರುವ ಸಮಯವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಿ ಎಂದು ಫರಹತಾಬಾದ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಇಂದುಮತಿ ಪಾಟೀಲ್ ಅವರು ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗ, ಭಾರೀತಯ ಗ್ರಂಥ ಪಾಲಕರ ಸಂಘ ದೆಹಲಿ, ಸಾಂಚಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜು ಮಲ್ಲಾಬಾದ ಇವರ ಸಯುಂಕ್ತಾಶ್ರಯದಲ್ಲಿ ನಡೆದ ರಾಷ್ಟ್ರಿಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಓದುವ ಹಂಗಲ ಹೆಚ್ಚಾಗಿದ್ದಾಗ ಯಾವ ವಿಷಯವು ದೊಡ್ಡದೆನಿಸುವುದಿಲ್ಲ ಹೀಗಾಗಿ ವಿದ್ಯಾರ್ಥಿಗಳು ಮೊಬೈಲ್ ಗಳು ಬಿಟ್ಟು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಳ್ಳಿ. ಹಿಂದೆ ಗ್ರಂಥಾಲಯಗಳಲ್ಲಿ ಹೆಚ್ಚಿನ ಸೌಕರ್ಯಗಳಿಲ್ಲದ್ದಕ್ಕೆ ಹೆಚ್ಚಿನ ವಿಷಯಗಳು ತಿಳಿದುಕೊಳ್ಳಲು ಕಷ್ಟವಾಗಿತ್ತು. ಈಗ ಎಲ್ಲವು ಡಿಜಿಟಲಿಕರಣಗೊಂಡಿದೆ ಹೀಗಾಗಿ ಎಲ್ಲರೂ ಗ್ರಂಥಾಲಯಗಳನ್ನು ಹೆಚ್ಚು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಾಂಚಿ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಸಿಂಗೆ, ಹರ್ಷವರ್ಧನ ಡಿಗ್ರಿ ಕಾಲೇಜಿನ ಕನ್ನಡ ಉಪನ್ಯಾಸಕ ಗೌತಮ ಸಕ್ಕರಗಿ ಮಾತನಾಡುತ್ತಾ ಓದುವ ಹವ್ಯಾಸ ರೂಢಿಸಿಕೊಳ್ಳಿ ಆಗ ನಿಮ್ಮನ್ನು ಗ್ರಂಥಾಲಯ ತನ್ನತ್ತ ಸೆಳೆದುಕೊಳ್ಳುತ್ತದೆ ಎಂದ ಅವರು ಬರುವ ದಿನಗಳಲ್ಲಿ ಪಟ್ಟಣದ ಸರ್ಕಾರಿ ಪದವಿ ಕಾಲೇಜು ಗ್ರಂಥಾಲಯಗಳ ಸದ್ಬಳಕೆ ಕುರಿತಾಗಿ ಜಾಥಾ ರೀತಿಯಲ್ಲಿ ಅಭಿಯಾನ ಹಮ್ಮಿಕೊಳ್ಳಲಿ. ಅದಕ್ಕೆ ಎಲ್ಲರೂ ಸಹಕಾರ ನೀಡೋಣ.ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತರ ಪದವಿ ಕಾಲೇಜುಗಳ ಸಹಯೋಗದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು.ಕಾಲೇಜಿನ ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಮಾತನಾಡಿದರು. ಗ್ರಂಥಪಾಲಕಿ ಡಾ. ಸಾವಿತ್ರಿ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಕಾರ್ಯದರ್ಶಿ ಎಂ.ಎಸ್ ರಾಜೇಶ್ವರಿ, ಐಕ್ಯೂಎಸ್ಸಿ ಸಂಯೋಜಕ ಡಾ. ಸಂತೋಷ ಹುಗ್ಗಿ, ಡಾ. ದತ್ತಾತ್ರೇಯ ಸಿ.ಎಚ್, ಡಾ. ರಾಮಕೃಷ್ಣ ಹೆಚ್, ಡಾ. ವಿನಾಯಕ ಕುಲಕರ್ಣಿ, ಡಾ. ಸಂಗಣ್ಣ ಎಂ ಸಿಂಗೆ, ವೈಜನಾಥ ಭಾವಿ, ಡಾ. ಗಿರೀಜಾ, ಮಡಿವಾಳಪ್ಪ ಮುಗಳಿ, ಮಹಾಂತೇಶ ವಠಾರ, ಚನ್ನಬಸು ದೊಡ್ಮನಿ, ಸುರೇಶ ಮುಗಳಿ, ಗೌರಿಶಂಕರ ಬೂರೆ, ಶರಣಬಸವೇಶ್ವರ, ಡಾ. ಸುರೇಖಾ ಕರೂಟಿ, ರಾಜೇಶ್ವರಿ ಸರಸಂಬಿ, ಕವಿತಾ ರಾಠೋಡ ಡಾ. ಸೂಗುರೇಶ್ವರ ಆರ್.ಎಂ, ಶ್ರೀದೇವಿ ರಾಠೋಡ ಡಾ. ಮಹಮದ್ ಯೂನೂಸ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು..
