ಉದಯವಾಹಿನಿ, ಮುದಗಲ್ಲ : ಐತಿಹಾಸಿಕ ಪಟ್ಟಣದ ವಿವಿಧ ಸರಕಾರಿ ಕಛೇರಿಯಲ್ಲಿ ಹಾಗೂ ಶಾಲಾ ಕಾಲೇಜು ಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.ಪಟ್ಟಣದ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜು ಗಳಲ್ಲಿ ಸಡಗರ ದಿಂದ ಹಾಗೂ ಸಂಭ್ರಮದಿಂದ ವಿಶೇಷವಾಗಿ ಚಿನ್ನರ ವಿಶೇಷವಾದ ಉಡುಗೆಗ ಳಿಂದ ಕಂಗೊಳಿ ಸುತ್ತಿದ್ದರು ಉನ್ನತಿಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಂದ ಧ್ವಜವಂದನೆ ಮನಮೋಹಕ ವಾಗಿತ್ತು .
ಪಟ್ಟಣ ಪುರಸಭೆ ಸದಸ್ಯರು ಒಳಗೊಂಡು ಹಾಗೂ ಊರಿನ ಗಣ್ಯರು ಸೇರಿದಂತೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಿದರು ಹಾಗೂ ಪುರಸಭೆ ಯ ಹಿಂದೆ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಹಾಗೂ 14 -08-2023 ದೇಶ ಸೇವೆ ಸಲ್ಲಿಸಿ ಬಂದ ನಿವೃತ್ತಿ ಹೊಂದಿದ ವೀರ ಯೋಧರಿಗೆ ಮುಖ್ಯಾ ಧಿಕಾರಿ ನಭಿಸಾಬ ಕಂದಗಲ್ಲ ಅವರು ಸನ್ಮಾನಿಸಿ ಗೌರವಿಸಿದರು ಹಾಗೂ ನಾಡ ಕಾಯಾ೯ಲಯ ಮುದಗಲ್ಲ ಉಪ ತಹಶೀಲ್ದಾರ್ ತುಲುಜಾ ರಾಮ ಸಿಂಗ್ ಧ್ವಜಾರೋಹಣ ನೆರವೇರಿಸಿ ಮುದ್ದು ಮಕ್ಕಳಿಗೆ ಪೆನ್ ಮತ್ತು ಪುಸ್ತಕ ನೀಡಿ. ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು. ಹಾಗೂ ಪೋಲಿಸ್ ಠಾಣೆಯಲ್ಲಿ ,ಸರಕಾರಿ ಹಿರಿಯರು ಪ್ರಾಥಮಿಕ ಶಾಲೆ ,ಪ್ರೌಢಶಾಲೆ,ಸರಕಾರಿ ಪದವಿ ಪೂರ್ವ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಮುದಗಲ್ಲ, ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮುದಗಲ್ಲ , ವಿಜಯ ಮಹಾಂತೇಶ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಮುದಗಲ್ಲ,ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಧ್ವಜಾರೋಹಣ ನೆರವೇರಿ ಸಿದರು.

ವರದಿ: ಮಂಜುನಾಥ ಕುಂಬಾರ

Leave a Reply

Your email address will not be published. Required fields are marked *

error: Content is protected !!