
ಉದಯವಾಹಿನಿ ದೇವನಹಳ್ಳಿ:ರಾಜ್ಯದಲ್ಲಿ ಶೋಷಿತ ಸಮಾಜದ ಜನರಿಗೆ ನ್ಯಾಯ ಒದಗಿಸಲು ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದೆ,ಇಂದು ಸಮಾಜದಲ್ಲಿ ಹಲಾವಾರು ಸಮಸ್ಯೆಗಳು ರೂಪಾಂತರಗೊಂಡಿವೆ,ಇಷ್ಟೇಲ್ಲಾ ನ್ಯಾಯಾಲಯ, ಕಾನೂನು ಮತ್ತು ಹೋರಾಟಗಳ ನಡುವೆಯೂ ಇಂದಿಗೂ ಜಾತಿಯ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ ಎಂದು ಡಿ.ಎಸ್.ಎಸ್.ನ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅವರು ಹೇಳಿದರು.
ದೇವನಹಳ್ಳಿ ಟೌನ್ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ ) ವತಿಯಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೈತ್ರಿ ವನದ ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ಆಗಸ್ಟ್ 24 ,25 ,26 27 ರಂದು “ದಲಿತ ಚಳುವಳಿ ಅಂದು, ಇಂದು… ಮುಂದು .. ಅವಲೋಕನ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಆಯೋಜಿಸಿರುವ ಕುರಿತು” ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ದಲಿತ ಚಳುವಳಿಯ ಗೋಷ್ಠಿಯಲ್ಲಿ ಶಿಬಿರದ ಉದ್ಘಾಟನೆಯನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್, ಮುಖ್ಯ ಅತಿಥಿಗಳಾಗಿ ಇಂದಿರಾ ಕೃಷ್ಣಪ್ಪ ,ರಾಜಶೇಖರ್ ಮೂರ್ತಿ ,ಎ.ಬಿ.ರಾಮಚಂದ್ರಪ್ಪ ಮಾವಳ್ಳಿ ಶಂಕರ್ ಅವರ ಅಧ್ಯಕ್ಷತೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತಿ ವಿನಾಶದ ಪರಿಕಲ್ಪನೆ, ಸಮಕಾಲಿನ ಸಮಾಜದ ಅವಲೋಕನ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು, ಅಂಬೇಡ್ಕರ್ ಕುರಿತು ಸಿನಿಮಾ ಪ್ರದರ್ಶನ ಮತ್ತು ಸಂವಾದ, ಅಂಬೇಡ್ಕರ್ ಅವರ ಪರಿಕಲ್ಪನೆಯಲ್ಲಿ ಪ್ರಜಾಪ್ರಭುತ್ವ ಸಮಕಾಲಿನತೆ ಮತ್ತು ರಾಷ್ಟ್ರೀಯತೆ ,ಅಂಬೇಡ್ಕರ್ ಮತ್ತು ಮಹಿಳೆಯರ ಪ್ರಶ್ನೆ ಶಿಕ್ಷಣ ವ್ಯವಸ್ಥೆ ಮತ್ತು ದಲಿತರ ಪ್ರತಿನಿಧಿಕರಣ, ಮೀಸಲಾತಿಯ ಚಾರಿತ್ರಿಕ ಬೆಳವಣಿಗೆ ಮತ್ತು ನ್ಯಾಯಾಂಗದ ತೀರ್ಪುಗಳು ,ಮಾಧ್ಯಮಗಳು ಮತ್ತು ದಲಿತರ ಪ್ರಶ್ನೆಗಳು, ಜನಪ್ರಿಯ ಸಂಸ್ಕೃತಿಯಲ್ಲಿ ಅಂಬೇಡ್ಕರ್ ದಲಿತ ಚಳುವಳಿಯ ಅವಲೋಕ ನಾಯಕತ್ವ, ಹೊಸ ತಲೆಮಾರಿನ ಕಣ್ಣಲ್ಲಿ ದಲಿತ ಚಳುವಳಿ,ದಲಿತ ಸಾಂಸ್ಕೃತಿಕ ಅಸ್ಮಿತೆಯ ಹಾಡು ನಾಟಕ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು ಡಿ ಎಸ್ ಎಸ್ ಸಮಿತಿಯ ಜಿಲ್ಲಾವಾರು ಆಯ್ದಾ ಪದಾಧಿಕಾರಿಗಳು ಭಾಗವಿಹಿಸಲಿದ್ದಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ವಿಭಾಗಿಯ ಸಂಘಟನಾ ಸಂಚಾಲಕ ಕೆ.ಆರ್ ಮುನಿಯಪ್ಪ,ಮಾಜಿ ಸಂಚಾಲಕರು ಮೂರ್ತಿ, ಜಿಲ್ಲಾ ಸಂಚಾಲಕರು ಶ್ರೀನಿವಾಸ್, ಆವತಿ ತಿಮ್ಮರಾಯಪ್ಪ, ಜೋಗಳ್ಳಿ ನಾರಾಯಣಸ್ವಾಮಿ,, ರಮೇಶ್ ತಾಲೂಕು ಸಂಚಾಲಕ ನರಸಪ್ಪ ,ಆಲಗೊಂಡನಹಳ್ಳಿ ಮುನಿಸ್ವಾಮಿ, ಎಚ್. ಕೆ ವೆಂಕಟೇಶಪ್ಪ ,ನಾರಾಯಣಸ್ವಾಮಿ ಹಾಗೂ ದೇವನಹಳ್ಳಿ, ಹೊಸಕೋಟೆ ತಾಲೂಕಿನ ಸಂಚಾಲಕರು ಭಾಗವಹಿಸಿದ್ದರು.
