ಉದಯವಾಹಿನಿ, ತೆಲಂಗಾಣ : ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಸರ್ಕಾರದ ವಿರುದ್ಧ ತೆಲಂಗಾಣ ರಾಜ್ಯ ಉಸ್ತುವಾರಿ ಜಾವಡೇಕರ್ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ, ನಂಬಿಕೆ ದ್ರೋಹ ಬಿಟ್ಟರೆ ರಾಜ್ಯದಲ್ಲಿ ಬೇರೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಜಿ ಸಂಸದ ಕೊಂಡ ವಿಶ್ವೇಶ್ವರ್ ರೆಡ್ಡಿ ಇತರ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನೀರು, ನಿಧಿ, ನೇಮಕಾತಿ ಹೆಸರಿನಲ್ಲಿ ಸಿಎಂ ಕೆಸಿಆರ್ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಒಟ್ಟಿನಲ್ಲಿ ಕುಟುಂಬ ಆಡಳಿತ ಜಾರಿಗೆ ತಂದರು ಎಂದು ಟೀಕಿಸಿದರು. ಕಾಳೇಶ್ವರಂ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಈ ಯೋಜನೆಯಿಂದ ೧೮ ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದ ಅವರು, ಕೇವಲ ಒಂದು ಲಕ್ಷ ಎಕರೆಗೆ ಮಾತ್ರ ನೀರು ಹರಿಸಲಾಗಿದೆ. ಕೇಂದ್ರ ಸಚಿವರಾಗಿದ್ದಾಗ ತೆಲಂಗಾಣಕ್ಕೆ ನೀರು ತರುವ ಉದ್ದೇಶದಿಂದ ೧೫ ದಿನದೊಳಗೆ ಯೋಜನೆಗೆ ಅನುಮತಿ ನೀಡಿದ್ದೆ ಎಂದು ನೆನಪಿಸಿದರು. ರೂ. ೪೦ ಸಾವಿರ ಕೋಟಿ ಅಂದಾಜಿನಲ್ಲಿ ಯೋಜನೆ ಆರಂಭಿಸಿ ಕೊನೆಗೆ ರೂ.೧.೨೦ ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!