ಉದಯವಾಹಿನಿ, ಬೆಂಗಳೂರು: ಮಹಾರಾಣಿ ಕಾಲೇಜು ಕ್ಯಾಂಪಸ್‌ನ ಆವರಣದಲ್ಲಿ ಪ್ರೊಫೆಸರ್ ರೊಬ್ಬರ ಎಡವಟ್ಟು ಚಾಲನೆಯಿಂದಾಗಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಗೀತ ಶಿಕ್ಷಕಿ ಹಾಗೂ ಇಬ್ಬರು ವಿಧ್ಯಾರ್ಥಿನಿಯರು ಗಂಭೀರ ಗಾಯಗೊಂಡರೆ
ಇಂಗ್ಲೀಷ್ ಪ್ರೊಫೆಸರ್ ಎಚ್.ನಾಗರಾಜ್ ಅವರು ಅತಿವೇಗವಾಗಿ ಆಗಿ ಕಾರು ಚಲಾಯಿಸಿಕೊಂಡು ಕ್ಯಾಂಪಸ್‌ಗೆ ಬಂದು ಬ್ರೇಕ್ ಹಾಕಲು ಹೋಗಿ ಎಕ್ಸಿಲೇಟರ್ ಒತ್ತಿದ್ದಾರೆ.
ಪರಿಣಾಮ ಕಾರು ನಿಯಂತ್ರಣಕ್ಕೆ ಸಿಗದೇ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬಳಿಕ ಕಾರು ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಸ್ಕೂಟರ್‌ವೊಂದು ಜಖಂಗೊಂಡಿದೆ.
ಘಟನೆಯಲ್ಲಿ ಸಂಗೀತ ಶಿಕ್ಷಕಿ ಜ್ಯೋತಿ ಗಾಯಗೊಂಡಿದ್ದಾರೆ. ಬಿ.ಕಾಂ ವಿದ್ಯಾರ್ಥಿನಿ ಅಶ್ವಿನಿ ತಲೆಗೆ ತೀವ್ರ ಪೆಟ್ಟಾಗಿದ್ದು ಆಕೆಯನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮತ್ತೊಬ್ಬ ವಿದ್ಯಾರ್ಥಿನಿ ನಂದುಪ್ರಿಯಾಗೂ ಗಾಯವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ಸಚ್ಚಿನ್ ಘೋರ್ಪಡೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬೆಳಗ್ಗೆ ಪ್ರೊಫೆಸರ್ ನಾಗರಾಜ್ ಅವರು ಕಾರಿನಲ್ಲಿ ಬರುವಾಗ ಬ್ರೇಕ್ ಬದಲು ಎಕ್ಸಿಲೇಟರ್ ಪ್ರೆಸ್ ಮಾಡಿದ್ದಾರೆ. ಹೀಗಾಗಿ ಈ ಅಪಘಾತ ನಡೆದಿದೆ. ಘಟನೆಯಲ್ಲಿ ಅಶ್ಚಿನಿ (೧೯) ಎಂಬಾಕೆ ವರ್ಷ ತಲೆಗೆ ಗಾಯವಾಗಿದೆ. ನಂದುಪ್ರಿಯಾ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!