ಉದಯವಾಹಿನಿ, ಕೆ.ಆರ್ .ಪುರ : ಚಂಡಿಗಢನಲ್ಲಿ ನಡೆದ ೬೧ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್ಲ್ಲಿ ಕರ್ನಾಟಕ ತಂಡ ಪಂದ್ಯಾವಳಿಯಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚು ಪದಕ ಗಳಿಸುವ ಮೂಲಕ ಚಾಂಪಿಯನ್ಶಿಪ್ನಲ್ಲಿ ಹೆಮ್ಮೆಯ ತಂಡವಾಗಿ ಕರ್ನಾಟಕ ಹೊರಹೊಮ್ಮಿದ ತಂಡವನ್ನು ಕೆ.ಆರ್.ಪುರದಲ್ಲಿ ಸನ್ಮಾನಿಸಲಾಯಿತು.ಸಬ್ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಕೆ.ಆರ್.ಪುರದ ಕಗ್ಗದಾಸಪುರ ನಿವಾಸಿ ಮಂಜುನಾಥ್ ರವರ ಪುತ್ರಿ ಆರ್ಯ ಮಂಜುನಾಥ್ ಆಟಗಾರರನ್ನೊಳಗೊಂಡ ಕರ್ನಾಟಕ ತಂಡವೂ ತಮಿಳುನಾಡು, ತೆಲಂಗಾಣ, ಜಮ್ಮು ಕಾಶ್ಮೀರ, ಆಂದ್ರಪ್ರದೇಶ ತಂಡವನ್ನ ಮಣಿಸಿತ್ತು. ನಂತರ ಚಂಡಿಗಢ ಜೊತೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನಪ್ಪಿತು. ಬಳಿಕ ಮೂರನೇ ಸ್ಥಾನಕ್ಕಾಗಿ ಕೇರಳ ತಂಡದ ಜೊತೆಗೆ ನಡೆದ ಹಣಾಹಣಿಯಲ್ಲಿ ೩-೧ಪಾಯಿಂಟ್ಗಳಿಂದ ಗೆಲುವು ಸಾಧಿಸಿದೆ.
ತಂಡದ ಸದಸ್ಯರುನಾಯಕಿ ಮಾನ್ಯತಾ ,ಉಪನಾಯಕಿ ಆರ್ಯ ಮಂಜುನಾಥ, ಯಶಸ್ವಿನಿ , ಚಿನ್ಮಯಿ , ಮಾನ್ಯ , ಅಪೂರ್ವ , ಕೀರ್ತಿ ಮುಂಡಗೋಡು, ಮಾನಸಿ ಬೆಳಗಾವಿ, ಆರಾಧ್ಯ ಮೆನನ್ ಕಾರವಾರ, ಕರ್ನಾಟಕ ತಂಡದ ಆಟಗಾರರಿಗೆ ದಿಲೀಪ ಹಣಬರ ತರಬೇತಿ ನೀಡಿದ್ದರು. ಮಕ್ಕಳ ಸಾಧನೆಗೆ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.
