ಉದಯವಾಹಿನಿ, ಬೆಂಗಳೂರು: ಕೆಲಸ ಕೊಟ್ಟ ಮಾಲೀಕನ ಕಣ್ತಪ್ಪಿಸಿ ಹಣ ಕದಿಯುತ್ತಿದ್ದ ಹೋಟೆಲ್ ಕ್ಯಾಷಿಯರ್‍ನನ್ನು ಕೆ.ಆರ್. ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬನಶಂಕರಿ ನಿವಾಸಿ ಎಂ ಎಸ್ ರವಿಕುಮಾರ್ ಬಂಧಿತ ಕ್ಯಾಷಿ ಯರ್. ಕೆ.ಆರ್ ಪುರದ ಭಟ್ಟರ ಹಳ್ಳಿ ಸತೀಶ್ ಶೆಟ್ಟಿ ಎಂಬುವವರ ಹೋಟೆಲ್‍ಗೆ ಹೋಗಿ ತನಗೆ ವಯಸ್ಸಾಗಿದೆ ಆರ್ಥಿಕ ಸಂಕಷ್ಟದಲ್ಲಿದ್ದೇನೆಂದು ಸಂಕಷ್ಟದ ನೆಪವೊಡ್ಡಿ ಈ ವ್ಯಕ್ತಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾಗ ಕೌಂಟರ್‍ನಲ್ಲಿಯೇ ಎಲ್ಲರ ಕಣ್ತಪ್ಪಿಸಿ ಆಗಾಗ್ಗೆ ಹಣ ಜೇಬಿಗಿಳಿಸಿಕೊಂಡು ಒಂದು ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದನು.

ಮಾಲೀಕ ಸತೀಶ್ ಶೆಟ್ಟಿ ಅವರು ಸಿಸಿ ಟಿವಿ ಪರಿಶೀಲಿಸಿದಾಗ ಹಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಬಳಿಕ ಕ್ಯಾಷಿಯರ್‍ಗಾಗಿ ಹುಡುಕುತ್ತಿದ್ದರು. ಆರೋಪಿ ರವಿಕುಮಾರ್ ಬಳಿಕ ದೇವನಹಳ್ಳಿ ಬಳಿಯ ಹೋಟೆಲ್‍ಗೆ ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡಿದ್ದನು.ಈ ವಿಷಯ ತಿಳಿದ ಸತೀಶ್ ಶೆಟ್ಟಿಯವರು ಅಲ್ಲಿಗೆ ಹೋಗಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ರವಿಕುಮಾರ್‍ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯು ಪ್ರತಿಷ್ಠಿತ ಹೋಟೆಲ್‍ಗಳನ್ನೇ ಗುರಿಯಾಗಿಸಿಕೊಂಡು ಕ್ಯಾಷಿಯರ್ ಕೆಲಸಕ್ಕೆ ಸೇರಿಕೊಂಡು ಹಣ ಎಗರಿಸುತ್ತಿದ್ದುದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!