ಉದಯವಾಹಿನಿ, ದಾವಣಗೆರೆ: ಡಾ ಪಂಡಿತ ಪುಟ್ಟರಾಜ ಸೇವಾ ಸಮಿತಿ, ಗದಗ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ ಗಳಿಂದ ಡಾ ಪಂಡಿತ ಪುಟ್ಟರಾಜ ಗವಾಯಿಗಳವರ ಜನ್ಮ ದಿನೊತ್ಸವವನ್ನು ಅರ್ಥ ಪೂರ್ಣವಾಗಿ ನಗರದ ಪಿ ಬಿ ರಸ್ತೆಯಲ್ಲಿರುವ ಹೋಟೆಲ್ ಶ್ರೀಗಂಧ ರೆಸಿಡೆನ್ಸಿಯಲ್ಲಿ ಆಚರಿಸಲಾಯಿತು. .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ ಬಿ ವಿನಾಯಕ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷರಾದ ಸೌಮ್ಯ ಸತೀಶ್ ಧಾರವಾಡ,ಆನಂದ್ ಪಾಟೀಲ್, ಮತ್ತೊರ್ವ ಮುಖ್ಯ ಅತಿಥಿಗಳು ಮತ್ತು ಉಪನ್ಯಾಸಕರಾಗಿ ಆಗಮಿಸಿದ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷರಾದ ಪರಮೇಶ್ವರಪ್ಪ ಸಿರಿಗೆರೆ ಮಾತನಾಡಿ, ಪುಟ್ಟರಾಜ ಗವಾಯಿಗಳು ನಡೆದು ಬಂದ ದಾರಿ ಅವರು ಸಂಗೀತ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ, ಸಾವಿರಾರು ಅಂಧರಿಗೆ ದಾರಿ ದೀಪವಾಗಿರುವ ಜೀವನವನ್ನು ತಮ್ಮದೇ ಶೈಲಿಯಲ್ಲಿ ನೆರೆದಿದ್ದ ಎಲ್ಲ ಭಕ್ತರಿಗೂ ಉಣಬಡಿಸಿದರು. ಸಂಗೀತಗಾರರಾದ ಆನಂದ್ ಪಾಟೀಲ್ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ ಮತ್ತು ಘಟಕದ ಉಪಾಧ್ಯಕ್ಷರಾದ ರೇವನಸಿದ್ದಪ್ಪ ರವರ ಶಿಷ್ಯದಿರಿಂದ ಸಂಗೀತ ಕಾರ್ಯಕ್ರಮ ಮತ್ತು ನಂದೀಶ್ ಅವರಿಂದ ಕೊಳಲು ವಾದನ ನಡೆಯಿತು ಮತ್ತು ಜೂನಿಯರ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸತೀಶ್ ಧಾರವಾಡ ಪ್ರಶಸ್ತಿ ವಿತರಿಸಿ ಗೌರವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಮತಾ ನಾಗರಾಜ ನಡೆಸಿ ಕೊಟ್ಟರು. ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ ಬಿ ವಿನಾಯಕ ಮಾತನಾಡಿ ಪೂಜ್ಯರ ಯಾವುದೇ ಕಾರ್ಯಕ್ರಮಗಳನ್ನು ನಾವು ಮಾಡಬೇಕೆಂದುಕೊಂಡರೆ ಗುರುಗಳು ನಮಗೆ ಆ ಶಕ್ತಿಯನ್ನು ನೀಡಿ ನಮ್ಮಿಂದ ಅವರ ಸೇವೆಯನ್ನು ಮಾಡುವಂತೆ ಪ್ರೇರೇಪಿಸುತ್ತಾರೆ. ಅವರ ಆಶೀರ್ವಾದ ಒಂದಿದ್ದರೆ ಎಲ್ಲಾ ಕಾರ್ಯಕ್ರಮಗಳು ಸುಸುತ್ರವಾಗಿ ನೆರವೇರುತ್ತದೆ ಎಂದು ಹೇಳಿ ಎಲ್ಲರನ್ನು ವಂದಿಸಿದರು. .ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ರೇವಣಸಿದ್ಧಪ್ಪ, ವನಜ ಮಹಾಲಿಂಗಯ್ಯ, ವಿಕ್ರಂ ಜೋಶಿ, ಅಭಿಷೇಕ್ ಎಸ್ ಆರ್. ಶ್ರೀನಿವಾಸ್ ಕುಂದೂರ್, ಮಮತಾ ನಾಗರಾಜ, ಪುಷ್ಪ ಎನ್ ಎಚ್, ಹಾಲೇಶ್, ಅನುಷಾ.ಮಂಜುಳಾ, ಮಂಜುಳಾ ಹುಂಡೇಕರ್, ಪುಷ್ಪ ವೀರೇಶ್, ಶಾಂತ ಶಿವಶಂಕರ,ಲತಾ ಕಪಾಲಿ, ರಾಜಶ್ರೀ, ಸುಜಾತಾ, ಜ್ಯೋ ತಿ, ಸುಭಾಷಿನಿ, ಪೂರ್ಣಿಮಾ, ಚೈತ್ರ, ಮಮತಾ, ಸುಮಾ, ವಿದ್ಯಾ, ಶೋಭಾ ಉಪಸ್ಥಿತರಿದ್ದರು..

 

Leave a Reply

Your email address will not be published. Required fields are marked *

error: Content is protected !!