ಉದಯವಾಹಿನಿ, ಮಂಡ್ಯ : ಡಿನೋಟಿಫಿಕೇಷನ್ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಡಿನೋಟಿಫಿಕೇಷನ್ಗೂ ಏನು ಸಂಬಂಧ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಯಾವ ತಪ್ಪು ಮಾಡಿರುವುದಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನವರಿಗೆ ಕನ್ನಡ ಸರಿಯಾಗಿ ಓದಲು ಬರುವುದಿಲ್ಲವೇ? ದಾಖಲೆಗಳನ್ನು ಸರಿಯಾಗಿ ನೋಡಿದ್ದಾರೆಯೇ? ಯಾರೋ ಬರೆದುಕೊಟ್ಟಿರುವುದನ್ನು ತುತ್ತೂರಿ ಊದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣಕ್ಕೂ ನನಗೂ ಯಾವ ಸಂಬಂಧ ವಿಲ್ಲ. ಆದರೂ, ನನ್ನ ರಾಜೀನಾಮೆ ಕೇಳಲು ಕಾಂಗ್ರೆಸ್ನವರು ಹುಚ್ಚರಾ? ಏನು ತಪ್ಪು ಮಾಡಿದ್ದೇನೆ? ಏಕೆ ರಾಜೀನಾಮೆ ಕೊಡಲಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!