ಉದಯವಾಹಿನಿ, ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ಯುವಸಂಭ್ರಮದ 2ನೇ ದಿನದಂದು ಜಿನುಗುಟುವ ಮಳೆಯಲು ಕಿಕ್ಕಿರಿದ ಯುವಜನತೆಯಿಂದ ತುಂಬಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧಾರವಾಡದ ಕಮೋಡಳ್ಳಿ ಕಲಾ ತಂಡದವರ ಮಲಗಂಬ ಪ್ರದರ್ಶನವನ್ನು ಜನರು ಕಣ್ ತುಂಬಿಕೊಂಡರು, ಮಂಡ್ಯದ ಕಿರುಗಾವಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ತಂಡದವರ ಮಹಿಳೆಯರ ಶಕ್ತಿ, ಆತ್ಮವಿಶ್ವಾಸ ಮತ್ತು ಅವರ ಸಾಮಥ್ರ್ಯದ ಕುರಿತು ನೃತ್ಯವನ್ನು ಪ್ರದರ್ಶಿಸಿದರು, ಮೈಸೂರಿನ ಟೇರಿಷಿಯನ್ ಪದವಿ ಪೂರ್ವ ಕಾಲೇಜಿನ ತಂಡದವರ ರಾಷ್ಟ್ರೀಯ ಭಾವೈಕ್ಯತೆಯ ಕುರಿತು ನೃತ್ಯವನ್ನು ಪ್ರದರ್ಶಿಸಿದರು.
