ಉದಯವಾಹಿನಿ,  ಗೌರಿಬಿದನೂರು: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು, ಗುಡಿಬಂಡೆ ಮನೋರಂಜನೆ ಹಾಸನ ಗುಡಿಬಂಡೆ ಕೋಟೆ ಮೇಲೆ ಕನ್ನಡ ರಾಜ್ಯೋತ್ಸವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಹೊಯ್ಸಳ ಚಾರಣಿಗರ ತಂಡದ ಸದಸ್ಯರು ಭಾನುವಾರ ಗುಡಿಬಂಡೆ ಕೋಟೆಯ ತುದಿಯಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು. ಬೆಂಗಳೂರು ಗ್ರಾಮಾಂತರ ಬೀದರ್ ಧ್ವಜಾರೋಹಣವನ್ನು ಗುಡಿಬಂಡೆ ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ನೆರವೇರಿಸಿದರು.

ಹೊಯ್ಸಳ ಚಾರಣಿಗರ ತಂಡದ ಅಧ್ಯಕ್ಷ ಅಶೋಕ್ ಮಾತನಾಡಿ, ‘ಇಂದಿನ ಚಾಮರಾಜ ನಗರ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕನ್ನಡಿಗರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿದ್ದೇವೆ. ಜೊತೆಗೆ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಬೇಕು’ ಎಂದರು. ಚಿಕ್ಕಮಗಳೂರು ಚಿತ್ರದುರ್ಗ ದಾವಣಗೆರೆ ಪ್ರಾಧ್ಯಾಪಕ ನಂಜುಂಡಪ್ಪ ಮಾತನಾಡಿ, ‘ಕರ್ನಾಟಕಕ್ಕೆ ಆಗಮಿಸುವ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿ, ನಾವು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎಲ್ಲೆಡೆ ವಿಸ್ತರಿಸಬೇಕು’ ಎಂದರು. ಧಾರಾವಾಡ ಗದಗ ಉಡುಪಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಯಾದವ್ ಕನ್ನಡ ಹೋರಾಟದ ಬಗ್ಗೆ ವಿವರವಾಗಿ ತಿಳಿಸಿದರು. ಕಸಾಪ ಸಂಚಾಲಕ ಶ್ರಿನಿವಾಸ್ ಗಾಂಧಿ, ನರಸಿಂಹ ಮೂರ್ತಿ, ನರಸಿಂಹ ಗೌಡ, ಈರೇಗೌಡ, ಜಯಣ್ಣ, ಶ್ರೀನಿವಾಸ್, ರಾಜೇಶ್ ಪ್ರವೀಣ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!