ಉದಯವಾಹಿನಿ, ಚಿತ್ರದುರ್ಗ: ‘ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಆಡಳಿತ ನಡೆಸಲಿದೆ. ಮಹಾರಾಷ್ಟ್ರದ ಹಾಗೆ ಇಲ್ಲಿ ಯಾವ ಬೆಳವಣಿಗೆಗಳೂ ನಡೆಯುವುದಿಲ್ಲ. ಏಕನಾಥ ಶಿಂದೆ ರೀತಿ ಶಾಸಕರನ್ನು ಕರೆದುಕೊಂಡು ಯಾರೂ ಬಿಜೆಪಿಗೆ ಹೋಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.’ಬಿ.ವೈ.ವಿಜಯೇಂದ್ರ ಹೇಳಿದಂತೆ ಕಾಂಗ್ರೆಸ್‌ನಲ್ಲಿ ಯಾವ ಕ್ಷಿಪ ಕ್ರಾಂತಿಯೂ ನಡೆಯುವುದಿಲ್ಲ. ಬಿಜೆಪಿಯಲ್ಲೇ ಹಲವು ಬಣಗಳ ನಡುವೆ ಒಳಜಗಳವಿದೆ. ಅವರ ಕ್ರಾಂತಿ ಆದರೂ ಆಗಬಹುದು. ಏಕನಾಥ ಶಿಂದೆ ರೀತಿ ಕಾಂಗ್ರೆಸ್ ನಾಯಕರೊಬ್ಬರು ಶಾಸಕರ ಪಡೆಯೊಂದಿಗೆ ಬಿಜೆಪಿ ಸೇರುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿರುವುದು ಹಾಸ್ಯಾಸ್ಪದೆ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಶ ಫೌಂಡೇಷನ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ಕಾಣಿಸಿಕೊಂಡ ಮಾತ್ರಕ್ಕೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದರು. ‘ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಮುಖಂಡರು ವ್ಯಂಗ್ಯ ಮಾಡುತ್ತಿದ್ದರು. ರಾಜ್ಯಕ್ಕೆ ಆರ್ಥಿಕ ದುಸ್ಥಿತಿ ಬರುತ್ತದೆ ಎನ್ನುತ್ತಿದ್ದರು. ದೆಹಲಿ, ಮಹಾರಾಷ್ಟ್ರದಲ್ಲಿ ಅವರೂ ಗ್ಯಾರಂಟಿ ಕೊಟ್ಟಿದ್ದಾರೆ. ಅದನ್ನು ಹೇಗೆ ಜಾರಿ ಮಾಡುತ್ತಾರೋ ನೋಡೋಣ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!