ಉದಯವಾಹಿನಿ, ಮಳೆಗಾಲದ ಸಂದರ್ಭದಲ್ಲಿ ಹವಾಮಾನದ ಬದಲಾವಣೆಗಳಿಂದ ಅನೇಕ ಜನರು ವಿವಿಧ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಪ್ರಮುಖವಾಗಿ, ಶೀತ, ಕೆಮ್ಮು, ಜ್ವರ ಮತ್ತು ಗಂಟಲು ನೋವು ತೊಂದರೆ ಎದುರಾಗುತ್ತದೆ. ಇದರಿಂದ, ಏನೇ ತಿಂದರೂ ಕೂಡ ನಾಲಿಗೆ ರುಚಿ ಗ್ರಹಿಸುವುದಿಲ್ಲ. ಅಂತಹ ಸಮಯದಲ್ಲಿ, ಬೆಳ್ಳುಳ್ಳಿಯಿಂದ ಸಿದ್ಧಪಡಿಸಿದ ರಸಂ ತಯಾರಿಸಲು ಪ್ರಯತ್ನಿಸಿ.

ಬಿಸಿ ಬಿಸಿ ಅನ್ನದೊಂದಿಗೆ ಈ ರಸಂ ಸೇವಿಸಿದರೆ ಸಖತ್ ಟೇಸ್ಟಿಯಾಗಿರುತ್ತದೆ. ಬಾಯಲ್ಲಿ ಹುಳಿ ಮತ್ತು ಖಾರದ ರುಚಿ ನಿಮಗೆ ದೊರೆಯುತ್ತದೆ. ಈ ರಸಂ ಅನ್ನು ಮಳೆಗಾಲದಲ್ಲಿ ಸೇವನೆ ಮಾಡಿದರೆ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಕೆಲವೇ ಪದಾರ್ಥಗಳೊಂದಿಗೆ ಈ ರಸಂ ಅನ್ನು ತುಂಬಾ ಸುಲಭವಾಗಿ ತಯಾರಿಸಬಹುದು. ಇದೀಗ, ತಡಮಾಡದೇ ಆರೋಗ್ಯಕರ ಬೆಳ್ಳುಳ್ಳಿ ರಸಂ ಸಿದ್ಧಪಡಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಹುಣಸೆಹಣ್ಣು – ಒಂದು ಸಣ್ಣ ನಿಂಬೆ ಗಾತ್ರದಷ್ಟು
ಮಧ್ಯಮ ಗಾತ್ರದ ಟೊಮೆಟೊ – ಎರಡು
ಜೀರಿಗೆ – ಎರಡು ಟೀಸ್ಪೂನ್​
ಕಾಳುಮೆಣಸು – ಒಂದು ಟೀಸ್ಪೂನ್​
ಬೆಳ್ಳುಳ್ಳಿ ಎಸಳು – ಒಂದು ಹಿಡಿ
ಎಣ್ಣೆ – ಒಂದು ಟೀಸ್ಪೂನ್​
ಹಸಿಮೆಣಸಿನಕಾಯಿ – ನಾಲ್ಕರಿಂದ ಐದು
ಕರಿಬೇವು ಎಲೆಗಳು – ಒಂದು ಹಿಡಿಯಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ಕಾಲು ಟೀಸ್ಪೂನ್​
ಕೊತ್ತಂಬರಿ ಸೊಪ್ಪು – ಸ್ವಲ್ಪ

ರುಚಿಕರ ಹಾಗೂ ಆರೋಗ್ಯಕರ ಬೆಳ್ಳುಳ್ಳಿ ರಸಂ ತಯಾರಿಸಲು ಮೊದಲಿಗೆ ಹುಣಸೆಹಣ್ಣನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ಅದನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಬೌಲ್​ನಲ್ಲಿ ಸಾಕಷ್ಟು ನೀರನ್ನು ಹಾಕಿ, ಹತ್ತು ನಿಮಿಷಗಳ ಕಾಲ ನೆನೆಸಿಡಿ.
ಹುಣಸೆಹಣ್ಣು ಚೆನ್ನಾಗಿ ನೆನೆದ ಬಳಿಕ, ಅದನ್ನು ಕೈಗಳಿಂದ ಹಿಸುಕಿ ದಪ್ಪ ತಿರುಳು ಹಾಗೂ ಬೀಜಗಳನ್ನು ಹೊರತೆಗೆದುಕೊಳ್ಳಿ.
ನಂತರ ಟೊಮೆಟೊವನ್ನು ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿ ಸಿದ್ಧವಾಗಿ ಇಡಿ.
ಬಳಿಕ ಮಿಕ್ಸರ್ ಜಾರ್​ನಲ್ಲಿ ಜೀರಿಗೆ ಮತ್ತು ಮೆಣಸಿನಕಾಯಿಯನ್ನು ಸೇರಿಸಿ ಒರಟಾಗಿ ರುಬ್ಬಿಕೊಳ್ಳಬೇಕು. ಬಳಿಕ, ಬೆಳ್ಳುಳ್ಳಿ ಎಸಳುಗಳನ್ನು ಸಿಪ್ಪೆಯೊಂದಿಗೆ ಸೇರಿಸಿ, ಸಣ್ಣಗಾದ ಬಳಿಕ ಒಂದು ಬಟ್ಟಲಿನಲ್ಲಿ ಹಾಕಿ ಪಕ್ಕಕ್ಕೆ ಇಡಿ.

Leave a Reply

Your email address will not be published. Required fields are marked *

error: Content is protected !!