ಉದಯವಾಹಿನಿ, ಲಕ್ನೋ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ದಟ್ಟ ಮಂಜುನಿಂದಾಗಿ ರದ್ದುಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯದ ಟಾಸ್ ವಿಳಂಬವಾಗಿತ್ತು. ಸಂಜೆ 6:30ಕ್ಕೆ ಟಾಸ್‌ ಪ್ರಕ್ರಿಯೆ ನಡೆಯಬೇಕಿತ್ತು. ಹಲವು ಬಾರಿ ಅಂಪೈರ್‌ಗಳು ಮೈದಾನಕ್ಕೆ ಇಳಿದು ಪಿಚ್‌ ಪರಿಶೀಲಿಸಿದ್ದರು. ಪ್ರತಿಬಾರಿ ಮೈದಾನಕ್ಕೆ ಇಳಿದಾಗ ಮುಂದೆ ಪಂದ್ಯ ಆರಂಭವಾಗಬಹುದುಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ರಾತ್ರಿ 9:25ಕ್ಕೆ ಅಂಪೈರ್‌ಗಳು ಪಂದ್ಯವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡರು. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕೊನೆ ಪಂದ್ಯವನ್ನು ಆಫ್ರಿಕಾ ಗೆದ್ದುಕೊಂಡರೆ ಸರಣಿ 2-2 ರಲ್ಲಿ ಸಮವಾಗಲಿದೆ. ಮೊದಲ ಪಂದ್ಯವನ್ನು ಭಾರತ 101 ರನ್‌ಗಳಿಂದ ಜಯ ಸಾಧಿಸಿದರೆ ಎರಡನೇ ಪಂದ್ಯವನ್ನು ಆಫ್ರಿಕಾ 51 ರನ್‌ಗಳಿಂದ ಗೆದ್ದುಕೊಂಡಿತ್ತು. ಮೂರನೇ ಪಂದ್ಯದಲ್ಲಿ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನದಿಂದ ಭಾರತ 7 ವಿಕೆಟ್‌ಗಳ ಜಯ ಸಾಧಿಸಿತ್ತು.

Leave a Reply

Your email address will not be published. Required fields are marked *

error: Content is protected !!