ಉದಯವಾಹಿನಿ, ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಅಹಮದಾಬಾದ್ನಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ 2026 ಸೂಪರ್ 8 ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ಆದಾಗ್ಯೂ ಈ ಘರ್ಷಣೆಗೆ ಮುನ್ನ ಭಾರತವು ದೊಡ್ಡ ಗಾಯದ ಭೀತಿಯನ್ನು ಎದುರಿಸಿದೆ.
ಈ ಟಿ20 ವಿಶ್ವಕಪ್ನಲ್ಲಿ ಭಾರತವು ಹಲವಾರು ಅನಾರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ತಲಾ ಒಂದು ಪಂದ್ಯವನ್ನು ತಪ್ಪಿಸಿಕೊಂಡರು. ವಾಷಿಂಗ್ಟನ್ ಸುಂದರ್ ಕೂಡ ತಡವಾಗಿ ತಂಡ ಸೇರಿದ್ದರು. ಟಿ20 ವಿಶ್ವಕಪ್ 2026 ಕ್ಕೆ ಸ್ವಲ್ಪ ಮೊದಲು, ಹರ್ಷಿತ್ ರಾಣಾ ಗಾಯದಿಂದ ಹೊರಗುಳಿದರು ಮತ್ತು ಅವರ ಬದಲಿಗೆ ಮೊಹಮ್ಮದ್ ಸಿರಾಜ್ ತಂಡ ಸೇರಿದ್ದರು. ಇದೀಗ ಅಭ್ಯಾಸದ ವೇಳೆ ಸಿರಾಜ್ ಗಾಯಗೊಂಡಿದ್ದಾರೆ.
ತರಬೇತಿಯ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಹೊಡೆದ ಚೆಂಡು ಸಿರಾಜ್ ಅವರ ಎಡ ಮೊಣಕಾಲಿಗೆ ಬಡಿದು ಗಾಯವಾಗಿದೆ. ಘಟನೆಯ ನಂತರ ಮೊಹಮ್ಮದ್ ಸಿರಾಜ್ ನೋವಿನಿಂದ ಬಳಲುತ್ತಿದ್ದರು. ಮತ್ತು ಅವರು ನೆಟ್ಸ್ನಿಂದ ಹೊರನಡೆದರು. ಸಿರಾಜ್ ಯುಎಸ್ಎ ವಿರುದ್ಧದ ಮೊದಲ ಗ್ರೂಪ್ ಪಂದ್ಯದಲ್ಲಿ ಆಡಿ ಮೂರು ವಿಕೆಟ್ಗಳನ್ನು ಕಿತ್ತಿದ್ದರು.ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ವರುಣ್ ಚಕ್ರವರ್ತಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರನ್ನು ವಿಕೆಟ್ ಟೇಕಿಂಗ್ ಪ್ರಮುಖ ಬೌಲರ್ ಎಂದು ಬಣ್ಣಿಸಿದ್ದಾರೆ. ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಡೀ ಬೌಲಿಂಗ್ ಘಟಕವು ಒಗ್ಗಟ್ಟಿನ ತಂಡವಾಗಿ ಸಹಕರಿಸಬೇಕು ಮತ್ತು ಎದುರಾಳಿಗಳ ಮೇಲೆ ಒತ್ತಡ ಹೇರಬೇಕು” ಎಂದರು.ಭಾರತ ತನ್ನ ಮೊದಲ ಸೂಪರ್-8 ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಆ ಬಳಿಕ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಜತೆಗೆ ಸೆಣಸಾಡಲಿದೆ. ಸೆಮಿಫೈನಲ್ಗೆ ಮುನ್ನಡೆಯಲು ಅಗ್ರ-ಎರಡು ಸ್ಥಾನಗಳನ್ನು ಗಳಿಸಬೇಕು. ಅಂದರೆ ಕನಿಷ್ಠ 2 ಗೆಲುವು ಅತ್ಯಗತ್ಯ.
