ಉದಯವಾಹಿನಿ,  ಮನೆ ಹುಡುಗ ಕೆಎಲ್‌ ರಾಹುಲ್‌, ಟ್ರಿಸ್ಟನ್‌ ಸ್ಟಬ್ಸ್‌ ಅವರ ಅರ್ಧಶತಕ, ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಅವರ ಸ್ಫೋಟಕ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್‌ ಆರ್‌ಸಿಬಿ ವಿರುದ್ಧ5 ವಿಕೆಟ್‌ಗಳ ರೋಚಕ ಸಾಧಿಸಿದೆ.ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಆರ್‌ಸಿಬಿ 8 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ 1 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 179 ರನ್‌ ಹೊಡೆದು ಟೂರ್ನಿಯಲ್ಲಿ ಮೂರನೇ ಜಯ ಗಳಿಸಿತು.
ಕೊನೆಯ 4 ಓವರ್‌ನಲ್ಲಿ ಡೆಲ್ಲಿ ಗೆಲ್ಲಲು 41 ರನ್‌ ಬೇಕಿತ್ತು. ಹ್ಯಾಜಲ್‌ವುಡ್‌ ಎಸೆದ 17ನೇ ಓವರ್‌ನಲ್ಲಿ 4 ರನ್‌ ಬಂದರೆ ಭುವನೇಶ್ವರ್‌ ಎಸೆದ 18ನೇ ಓವರ್‌ನಲ್ಲಿ 12 ರನ್‌ ಬಂತು. ರಸಿಕ್‌ ಧಾರ್‌ ಎಸೆದ 19ನೇ ಓವರ್‌ನಲ್ಲಿ 10 ರನ್‌ ಬಂದಿತ್ತು.
ಕೊನೆಯ 6 ಎಸೆತದಲ್ಲಿ 15 ರನ್‌ ಬೇಕಿತ್ತು. ರೊಮಾರಿಯೋ ಶೆಫರ್ಡ್ ಎಸೆದ ಮೊದಲ ಎರಡು ಎಸೆತದಲ್ಲಿ ಎರಡು ರನ್‌ ಬಂತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಮಿಲ್ಲರ್ ಸಿಕ್ಸ್‌ ಸಿಡಿಸಿದರು. ಐದನೇ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ಮಿಲ್ಲರ್‌ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಸ್ಟಬ್ಸ್‌ ಮತ್ತು ಮಿಲ್ಲರ್‌ 24 ಎಸೆತಗಳಲ್ಲಿ 45 ರನ್‌ ಜೊತೆಯಾಟವಾಡಿದರು. ಸ್ಟಬ್ಸ್‌ ಔಟಾಗದೇ 60 ರನ್‌(47 ಎಸೆತ, 4 ಬೌಂಡರಿ, 1 ಸಿಕ್ಸ್‌), ಡೇವಿಡ್‌ ಮಿಲ್ಲರ್‌ ಔಟಾಗದೇ 22 ರನ್‌(10 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿದರು
ಡೆಲ್ಲಿ 2.5 ಓವರ್‌ಗಳಲ್ಲಿ 18 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಭುವನೇಶ್ವರ್‌ ಕುಮಾರ್‌ ಆರಂಭದಲ್ಲೇ ನಿಸ್ಸಾಂಕ, ಕರುಣ್‌ ನಾಯರ್‌, ಸಮೀರ್‌ ರಿಜ್ವಿ ವಿಕೆಟ್‌ ಪಡೆದರು. ಈ ಸಂಕಷ್ಟದ ಸಮಯದಲ್ಲಿ ಕೆಎಲ್‌ ರಾಹುಲ್‌ (KL Rahul) ಮತ್ತು ಸ್ಟಬ್ಸ್‌ 44 ಎಸೆತಗಳಲ್ಲಿ 69 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಕೆಎಲ್‌ ರಾಹುಲ್‌ 57 ರನ್‌ (34 ಎಸೆತ, 6 ಬೌಂಡರಿ, 2 ಸಿಕ್ಸ್‌) ಗಳಿಸಿದ್ದಾಗ ಸಿಕ್ಸ್‌ ಸಿಡಿಸಲು ಹೋಗಿ ಕೊಹ್ಲಿ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ನಾಯಕ ಅಕ್ಷರ್‌ ಪಟೇಲ್‌ 26 ರನ್‌(19 ಎಸೆತ, 3 ಬೌಂಡರಿ) ಗಳಿಸಿದ್ದಾಗ ಗಾಯಗೊಂಡು ಮೈದಾನದಿಂದ ಹೊರನಡೆದರು.
ಆರ್‌ಸಿಬಿಯ ಆರಂಭ ಉತ್ತಮವಾಗಿತ್ತು. 31 ಎಸೆತಗಳಲ್ಲಿ ಸಾಲ್ಟ್‌ ಮತ್ತು ಕೊಹ್ಲಿ 52 ರನ್‌ ಜೊತೆಯಾಟವಾಡಿದರು. ಕೊಹ್ಲಿ 19 ರನ್‌ ಗಳಿಸಿ ಔಟಾದರೆ ನಂತರ ಬಂದ ದೇವದತ್‌ ಪಡಿಕಲ್‌ 18 ರನ್‌ ಗಳಿಸಿ ಕ್ಯಾಚ್‌ನೀಡಿ ಹೊರನಡೆದರು.

ಸಾಲ್ಟ್‌ ಎಂದಿನಂತೆ ಆಕ್ರಮಣಕಾರಿಯಾಗಿ ಆಟವಾಡಿ 63 ರನ್(38 ಎಸೆತ, 4 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರು. ಟಿಮ್‌ ಡೇವಿಡ್‌ 26 ರನ್‌(17 ಎಸೆತ, 3 ಬೌಂಡರಿ, 1 ಸಿಕ್ಸ್‌), ಜಿತೇಶ್‌ ಶರ್ಮಾ 14 ರನ್‌(20 ಎಸೆತ, 1ಬೌಂಡರಿ) ಕೃನಾಲ್‌ ಪಾಂಡ್ಯ 12 ರನ್‌(10 ಎಸೆತ, 1 ಬೌಂಡರಿ) ಹೊಡೆದು ಔಟಾದರು. ಡೆಲ್ಲಿ ಇತರ ರೂಪದಲ್ಲಿ 11 ರನ್‌( ಲೆಗ್‌ಬೈ 2, ನೋಬಾಲ್‌ 1, ವೈಡ್‌ 1) ನೀಡಿತ್ತು.

ಎನ್‌ಗಿಡಿ, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌, ಮುಕೇಶ್‌ ಕುಮಾರ್‌ 1 ವಿಕೆಟ್‌ ಪಡೆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳಿಂದ ಜಾಸ್ತಿ ರನ್‌ ಬಾರದ ಕಾರಣ ಪಂದ್ಯವನ್ನು ಆರ್‌ಸಿಬಿ ಸೋಲಿಸಿದೆ.

Leave a Reply

Your email address will not be published. Required fields are marked *

error: Content is protected !!