ಉದಯವಾಹಿನಿ, ನವದೆಹಲಿ: ಕಳೆದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿಗೆ ನೆರವು ನೀಡಿದ್ದ ಶ್ರೀ ಚರಣಿಗೆ ಆಂಧ್ರ ಪ್ರದೇಶ ಸರ್ಕಾರ ಭರ್ಜರಿ ಉಡುಗೊರೆಯನ್ನು ನೀಡಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶ್ರೀ ಚರಣಿಗೆ 2.5 ಕೋಟಿ ರು ಹಾಗೂ ಗ್ರೂಪ್‌-I ಸರ್ಕಾರಿ ಹುದ್ದೆಯನ್ನು ನೀಡಿದ್ದಾರೆ. ಇದರ ಜೊತೆಗೆ ಅವರಿಗೆ ತವರೂರು ಕಡಪದಲ್ಲಿ 1000 ಚದರ ಅಡಿಯಲ್ಲಿ ನಿವೇಶನವನ್ನು ನೀಡಲಾಗಿದೆ. ಈ ಬಗ್ಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೇ ಘೋಷಿಸಿದ್ದಾರೆ.
ಶ್ರೀಚರಣಿ ಅವರು ದಿಲ್ಲಿಯಿಂದ ತವರಿಗೆ ಮರಳಿದ ಬಳಿಕ ಮೀಟಿಂಗ್‌ ನಡೆಸಿದ್ದ ಚಂದ್ರಬಾಬು ನಾಯ್ಡು ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. ಈ ವೇಳೆ ಅವರು ಚಂದ್ರಬಾಬು ನಾಯ್ಡು ಅವರ ಪ್ರದರ್ಶನವನ್ನು ಅಭಿನಂದಿಸಿದ್ದಾರೆ. ಭಾರತದ ಪರ ವಿಶ್ವಕಪ್‌ ಗೆಲ್ಲುವ ಮೂಲಕ ಆಂಧ್ರ ಪ್ರದೇಶಕ್ಕೆ ಗೌರವ ತಂದಿದ್ದಾರೆಂದು ಅವರು ಶ್ಲಾಘಿಸಿದ್ದಾರೆ. ಸಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಚರಣಿ ಭಾರತ ಮಹಿಳಾ ತಂಡ ಮೊಟ್ಟ ಮೊದಲ ಬಾರಿ 50 ಓವರ್‌ಗಳ ವಿಶ್ವಕಪ್‌ ಗೆದ್ದಿದ್ದೇಗೆಂದು ವಿವರಿಸಿದ್ದಾರೆ.
ಈ ಕ್ಷಣದವರೆಗಿನ ಶ್ರೀ ಚರಣಿಯ ಪಯಣ ಅದ್ಭುತವಾಗಿದೆ. 21ನೇ ವಯಸ್ಸಿನ ಎಡಗೈ ಸ್ಪಿನ್ನರ್ ಕಳೆದ ಏಪ್ರಿಲ್‌ನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಪಂದ್ಯಾವಳಿಯಾದ್ಯಂತ ಭಾರತದ ಅತ್ಯಂತ ವಿಶ್ವಾಸಾರ್ಹ ಬೌಲರ್‌ಗಳಲ್ಲಿ ಒಬ್ಬರಾದರು. ಅವರು ಹಲವಾರು ಪಂದ್ಯಗಳಲ್ಲಿ ಪ್ರಮುಖ ಸ್ಪೆಲ್‌ಗಳನ್ನು ನೀಡುವ ಮೂಲಕ 14 ವಿಕೆಟ್‌ಗಳನ್ನು ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ, ಅನ್ನೆಕೆ ಬಾಷ್ ಅವರನ್ನು ಶೂನ್ಯಕ್ಕೆ ಸಿಲುಕಿಸುವ ಮೂಲಕ ಅವರು ಭಾರತಕ್ಕೆ ನಿರ್ಣಾಯಕ ಪ್ರಗತಿಯನ್ನು ನೀಡಿದರು, ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಿದರು.
ಅವರು ರಾಜ್ಯಕ್ಕೆ ಮರಳಿದಾಗ ಆತ್ಮೀಯ ಸ್ವಾಗತ ದೊರೆಯಿತು. ಗನ್ನವರಂ ವಿಮಾನ ನಿಲ್ದಾಣದಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಜ್ಯ ಸಚಿವರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಲು ಜಮಾಯಿಸಿದರು.

Leave a Reply

Your email address will not be published. Required fields are marked *

error: Content is protected !!