ಉದಯವಾಹಿನಿ ದೇವರಹಿಪ್ಪರಗಿ: ಜಲ‌ ಜೀವನ್ ಮಿಷನ್ ಯೋಜನೆ ಮೂಲಕ  ‌ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೆ ನಲ್ಲಿ‌ ಸಂಪರ್ಕ ಮೂಲಕ ಶುದ್ದ ಕುಡಿಯುವ ನೀರು  ಒದಗಿಸಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು. ಮತಕ್ಷೇತ್ರದ ಕಲಕೇರಿ ತಾಂಡಾ ಗ್ರಾಮದಲ್ಲಿ ರವಿವಾರದಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ ಸಿಂದಗಿ ವತಿಯಿಂದ 2022-23ನೇ ಸಾಲಿನ ಜಲ ಜೀವನ್ ಮಿಷನ್  ಯೋಜನೆಯಡಿಯಲ್ಲಿ ಮನೆ ಮನೆ ನಳ ಸಂಪರ್ಕ ಯೋಜನೆಯ ಸುಮಾರು 64 ಲಕ್ಷ ರೂ ವೆಚ್ಚದ ಕಾಮಗಾರಿಗೆ  ಚಾಲನೆ ನೀಡಿ ಮಾತನಾಡಿದ ಅವರು,ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗೆ ತುತ್ತಾಗುತ್ತಿದ್ದರು. ಸರ್ಕಾರ ಸಾಕಷ್ಟು ಕಡೆಗಳಲ್ಲಿ ಆರ್ಓ ಪ್ಲಾಂಟ್ ಮಾಡಿದರು ಸಹ ಇನ್ನು ಆನರೋಗ್ಯಕ್ಕೆ‌ ತುತ್ತಾಗುತ್ತಿದ್ದನ್ನು ನಾವು ನೋಡಿತ್ತಿದ್ದೇವೆ. ಅದಕ್ಕಾಗಿ ಗ್ರಾಮೀಣ ಭಾಗದ ಜಾತ್ಯತೀತವಾಗಿ  ಪ್ರತಿ ಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ  ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸ ಮಾಡುವುದು ನಮ್ಮ ಮೊದಲ‌ ಆದ್ಯತೆ ಹಾಗೂ ಬರುವಂತ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ಗ್ರಾಮಗಳ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ರಾಜಹ್ಮದ ಸಿರಸಗಿ, ಇಲಾಖೆ ಅಧಿಕಾರಿಗಳಾದ ವ್ಹಿ ಬಿ ನಾಯಕ, ಪಿಡಿಒ ಎನ್ ಎಸ್ ದೊಡಮನಿ, ಗುತ್ತಿಗೆದಾರರಾದ ಎನ್ ಎಸ್ ಚವ್ಹಾಣ, ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಹೆಂಡಿ ,ಮುಖಂಡರುಗಳಾದ ಪರಶುರಾಮ ಬೇಡರ, ಹಾಜೀರಪಾಶ್ಯಾ ಜಾಗೀರದಾರ, ಕಾಶಿಮ್ ನಾಯ್ಕೋಡಿ, ವೀರಘಂಟಿ ಬಡಿಗೇರ, ವಿಶ್ವನಾಥ ಬಡಿಗೇರ, ಮುನ್ನಾ ಸಿರಸಗಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಗ್ರಾಪಂ ಸದಸ್ಯರು,ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!