ಉದಯವಾಹಿನಿ, ಬೆಂಗಳೂರು: ಪ್ರವಾಹ ಸಂಕಷ್ಟ ನಿವಾರಣೆಗಾಗಿ ವಿಶ್ವ ಬ್ಯಾಂಕ್ನಿಂದ 4000 ಕೋಟಿ ಸಾಲ ಮಾಡಲು ಮುಂದಾದ ಬಿಬಿಎಂಪಿ, ಹಣ ದುರುಪಯೋಗವಾಗುವ ಸಾಧ್ಯತೆ ಇದ್ದು ಸಾಲ ನೀಡದಂತೆ ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ವ್ಯವಸ್ಥಾಪಕಿ ಟ್ರಸ್ಟಿ ಅಮರೇಶ್ ವಿಶ್ವ ಬ್ಯಾಂಕ್ಗೆ ಮನವಿ ಮಾಡಿದ್ದಾರೆ.
ಬಿಬಿಎಂಪಿಯ ಎಸ್ಡಬ್ಲೂಡಿಗೆ ಇಲಾಖೆ ಸಂಬಂಧಿಸಿದ ಪ್ರಮುಖ ವಿಷಯದ ಬಗ್ಗೆ ಸಲ್ಲಿಸಲಾದ ದೂರಿನ ಪ್ರತಿಯನ್ನು ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆಯ ವ್ಯವಸ್ಥಾಪಕಿ ಟ್ರಸ್ಟಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಟ್ರಸ್ಟಿ ವೀರೇಶ್, ಮಾಹಿತಿ ಹಕ್ಕು ಕಾರ್ಯಕರ್ತರ ರಾಜ್ಯ ಸಮಿತಿಯ ತಿಮರೆಡ್ಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ (ಪಿ506272) ಅಡಿಯಲ್ಲಿ ವಿಶ್ವಬ್ಯಾಂಕ್ನಿಂದ 426 ಮಿಲಿಯನ್ ಡಾಲರ್ ಸಾಲದ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಅವರ ಅಧ್ಯಕ್ಷತೆಯಲ್ಲಿ 30.09.2024ರಂದು ಕರಡು ಡಿಎಲ್ಐ (ಡಿಸ್ಬರ್ಸೆಂಟ್ ಲಿಂಕ್‌್ಡ ಇಂಡಿಕೇಟರ್) ಅನ್ನು ಅನುಮೋದಿಸಲು ನಡೆದ ವರ್ಚುವಲ್ ಸಭೆ.ಸಾಲ ಮಂಜೂರಾತಿಗೆ ಸಭೆಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಯಿತು. 426 ಮಿಲಿಯನ್ ಡಾಲರ್ (ಅಂದಾಜು. ರೂ. 4000 ಕೋಟಿ) ಬೆಂಗಳೂರು ನಗರದಲ್ಲಿ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್ಎಸ್ಬಿ ಜಂಟಿಯಾಗಿ ಕಾರ್ಯಗತಗೊಳಿಸಲಿರುವ ಚಂಡಮಾರುತದ ನೀರಿನ ಚರಂಡಿಗಳ ಸುಧಾರಣೆಗೆ.

Leave a Reply

Your email address will not be published. Required fields are marked *

error: Content is protected !!